‘ಸಾರ್,ಕವಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕೂ ಅಂತೀರಾ?’
ಆಗ ತಾನೇ ಮೀಸೆ ಮೂಡಲು ತೊಡಗಿದ್ದ ಆ ಹುಡುಗ ಮುಖವನ್ನು ಚೂಪು ಮಾಡಿಕೊಂಡು ನನ್ನನ್ನು ಗುರಿಯಾಗಿಟ್ಟುಕೊಂಡು ಪ್ರಶ್ನೆಯೊಂದನ್ನು ಒಗೆದ.
ನಾನಾಗಿದ್ದಿದ್ದರೆ, ‘ಸಾರ್ ಕವಿತೆಯನ್ನು ಬಿಳಿ ಹಾಳೆಯ ಒಂದೇ ಮಗ್ಗುಲಲ್ಲಿ ಬರೆಯಬೇಕಾ?ಅಥವಾ ಎರಡೂ ಕಡೆ ಬರೆದರೆ ಆಗುತ್ತದಾ?’ ಎಂದು ಕೇಳುವಂತಹ ವಯಸ್ಸು. ‘ಇದೆಲ್ಲಾ ಹೋಗಲಿ ಮಾರಾಯಾ..ನಿನ್ನ ಊರು ಯಾವುದು ? ಏನು ಮಾಡುತ್ತಿದ್ದೀಯಾ? ಹಾಸ್ಟೆಲಲ್ಲಿ ಊಟ ಸರಿಯಾಗುತ್ತದಾ? ಎಂದು ಕೇಳಿದೆ.
‘ಅಲ್ಲ ಸಾರ್ ಸಮಾಜದಲ್ಲಿ ಕವಿಗಳ ಪಾತ್ರ ಏನು ಸಾರ್?’ಆತ ಪುನಃ ಶುರು ಮಾಡಿದ.
‘ಅಲ್ಲ ಮಾರಾಯ ಕವಿಗಳಿಗೂ ಸಮಾಜಕ್ಕೂ ಅಂತಹ ಒಳ್ಳೆಯ ಸಂಬಂಧವೇನೂ ಇಲ್ಲ.ಹಾಗೆ ನೋಡಿದರೆ ಕವಿತೆ ಬರೆಯುವುದು ಒಂದು ರೀತಿಯಲ್ಲಿ ಸಮಾಜಬಾಹಿರ ಕೃತ್ಯ.ನಾನು ಮೊದಲ ಕವಿತೆ ಬರೆದದ್ದು ಒಂದು ಸಣ್ಣ ಚೀಟಿಯಲ್ಲಿ.ಆ ಚೀಟಿಯನ್ನು ಆ ಕಡೆಯ ಬೆಂಚಿನಲ್ಲಿ ಕುಳಿತಿದ್ದ ಹುಡುಗಿಗೆ ದಾಟಿಸಲು ಹೆಣಗಾಡುತ್ತಿದ್ದೆ.ಅದು ನಮ್ಮ ಸಮಾಜ ಶಾಸ್ತ್ರದ ಮೇಷ್ಟರ ಕೈಗೆ ಸಿಕ್ಕಿ ಅವರು ಸಮಾಜ ಪಾಠ ಮಾಡುವುದನ್ನು ನಿಲ್ಲಿಸಿ ನೀತಿ ಪಾಠ ಮಾಡಲು ಶುರುಮಾಡಿದರು.ಅದರಿಂದಾಗಿ ನನ್ನನ್ನು ಆ ವರ್ಷದ ಶಾಲಾ ಚುನಾವಣೆಗೆ ನಿಲ್ಲದಂತೆ ನಿಷೇಧ ಹೇರಲಾಯಿತು.ಇನ್ನೊಂದು ಕವಿತೆ ಆ ಹುಡುಗಿಯ ಅಪ್ಪನ ಕೈಗೆ ಸಿಕ್ಕಿಹಾಕಿಕೊಂಡು ಅವರು ಕೋವಿ ಹಿಡಿದುಕೊಂಡು ಊರೆಲ್ಲಾ ನನಗಾಗಿ ಹುಡುಕಾಡಿದ್ದರು.ನಾನು ನಮ್ಮ ಪ್ರಿನ್ಸಿಪಾಲರಿಗೆ ಕ್ಷಮಾಪಣಾ ಪತ್ರವನ್ನು ಬರೆದು ಕೊಡಬೇಕಾಯಿತು.ಹಾಗಾಗಿ ಸಮಾಜದ ಕುರಿತು ನನಗೆ ಕೊಂಚ ಹೆದರಿಕೆ ಬಿಟ್ಟರೆ ಬೇರೆ ಬದ್ಧತೆಯೇನೂ ಇಲ್ಲ’ಅಂದೆ.
View original post 410 more words